– ನವೀನ್ ಸೂರಿಂಜೆ ಫಹಾದ್ ಎಂಬ 24 ವರ್ಷದ ಯುವಕನನ್ನು ಮೈಸೂರು ಪೊಲೀಸರು ಭಯೋತ್ಪಾದನೆಯ ಆರೋಪದಲ್ಲಿ 2006 ರಂದು ಅರೆಸ್ಟ್ ಮಾಡಿದ್ದರು. ಆತನ ಸಹಚರರು ಎಂದು ಹೇಳಿ ಇನ್ನಿಬ್ಬರನ್ನು ಅರೆಸ್ಟ್ ಮಾಡಿದ್ದರು. ಫಹಾದ್ ಬಳಿ ಎಕೆ-47 ಕೂಡಾ ವಶಪಡಿಸಿಕೊಂಡು ಚಾರ್ಜ್ಶೀಟ್ ದಾಖಲಿಸಿದ್ದರು. ಫಹಾದ್ ಎಂಬ ಈ ಯುವಕ ಪಾಕಿಸ್ತಾನದವನು. ಆತನ ತಾಯಿ ಮೂಲತಹ ಕೇರಳದವರು. ಮೈಸೂರು-ಕೇರಳದ ಗಡಿಗಳಲ್ಲಿ ಸಂಬಂಧಿಕರನ್ನು ಹೊಂದಿರುವ ಫಹಾದ್ ತನ್ನ ಸಂಬಂಧಿಕರನ್ನು ಕಾಣಲು ಮೈಸೂರಿಗೆ ಬಂದಿದ್ದನು. ಇಲ್ಲಿಯೇ ಸಂಬಂಧಿಕ ಹುಡುಗಿಯೊಬ್ಬಳ ಜೊತೆ ಪ್ರೇಮಾಂಕುರವಾಗಿ ಮೈಸೂರಿನಲ್ಲೇ ಉಳಿಯಬೇಕು...
Author: hirolaits@gmail.com
ಕೋಮುವಾದದ ವಿರುದ್ಧ ನಿಜಕ್ಕೂ ಸಿದ್ದರಾಮಯ್ಯ ಏಕಾಂತ ಹೋರಾಟ ನಡೆಸಿದ್ದಾರೆಯೇ ? ನ್ಯಾಯಾಂಗದ ದಾಖಲೆಗಳು ಏನು ಹೇಳುತ್ತವೆ ?
ಎರಡು ವರ್ಷದ ಸಿಎಂ ಅವಧಿಯಲ್ಲಿ ಬಿಸಿನೆಸ್ ಮತ್ತು ಸರ್ಕಾರಿ ಕೆಲಸಕ್ಕಾಗಿ ಫಾರಿನ್ ಟೂರ್ ಮಾಡ್ತಾರಾ ಡಿಕೆಶಿ ! ಇದು ನೈತಿಕ ಸಂಘರ್ಷದ ಪ್ರಶ್ನೆಯಲ್ಲವೇ? ನ್ಯಾಯಾಲಯದ ಆದೇಶದಲ್ಲಿ ಏನಿದೆ?
– ನವೀನ್ ಸೂರಿಂಜೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ, ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಚರ್ಚೆಗಳ ಮಧ್ಯೆ ಡಿ ಕೆ ಶಿವಕುಮಾರ್ ಅವರು ಐಟಿ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ‘ತಮ್ಮ ವೈಯಕ್ತಿಕ ವ್ಯವಹಾರಗಳ ಅಭಿವೃದ್ಧಿ ಹಾಗೂ ರಾಜ್ಯದ ಆಡಳಿತಾತ್ಮಕ ಕಾರ್ಯಗಳ ನಿಮಿತ್ತ ಎರಡು ವರ್ಷಗಳ ಕಾಲ ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ’ 2026 ಮೇ 14 ರಂದು ಅರ್ಜಿ ಸಲ್ಲಿಸಿದ್ದಾರೆ. ಡಿ ಕೆ ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆಯು IT Act 278, 277 ಮತ್ತು IPC U/s 193, , 199, 120B ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಬೆಂಗಳೂರಿನ ನ್ಯಾಯಾಲಯದಲ್ಲಿ...
‘ಬಿಡದಿ ಟೌನ್ಶಿಪ್ಗೆ ಭೂಸ್ವಾಧೀನ ಮಾಡಿದ್ರೆ ಮುಂದಿನ ಎಲೆಕ್ಷನ್ನಲ್ಲಿ ಡಿಕೆಶಿ ಢಮಾರ್ !’ ಖುದ್ದು ಡಿ ಕೆ ಶಿವಕುಮಾರ್ ಅಂದು ಹೇಳಿದ್ದೇನು ?
ರೈತರ ಭಾರೀ ವಿರೋಧಕ್ಕೆ ಕಾರಣವಾಗಿರುವ ‘ಬಿಡದಿ ಟೌನ್ ಶಿಪ್ ಭೂಸ್ವಾಧೀನ’ ವಿರುದ್ಧ ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ರೈತರ ಯಾವ ಪ್ರತಿಭಟನೆಯನ್ನೂ ಗಣನೆಗೆ ತೆಗೆದುಕೊಳ್ಳದೇ, ಭೂಸ್ವಾಧೀನ ಮಾಡಿಯೇ ಸಿದ್ದ ಎಂದರ್ಥದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿಕೆಗಳನ್ನುಕೊಡುತ್ತಿದ್ದಾರೆ. ರೈತರ ವಿರುದ್ಧ ಡಿ ಕೆ ಶಿವಕುಮಾರ್ ಯುದ್ಧ ಸಾರಿರುವಂತೆ ಮಾತನಾಡುತ್ತಿದ್ದಾರೆ. ಬಿಡದಿ ಟೌನ್ ಶಿಪ್ ಯೋಜನೆ ಹೆಚ್ ಡಿ ಕುಮಾರಸ್ವಾಮಿಯವರ ರಿಯಲ್ ಎಸ್ಟೇಟ್ ಯೋಜನೆಯಾಗಿತ್ತು. 3 ಫೆಬ್ರವರಿ 2006 ರಿಂದ 8 ಅಕ್ಟೋಬರ್...
ಕರಾವಳಿ ಜನಪ್ರತಿನಿಧಿಗಳ ನಿಷ್ಠೆ ಯಾರ ಪರ ? ದಾಖಲೆಗಳು ಹೇಳುವ ಕಾಂಗ್ರೆಸ್-ಬಿಜೆಪಿ ಮೆಡಿಕಲ್ ಮಾಫಿಯಾ ಮೈತ್ರಿ ಕತೆ !
ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯು ‘ಜಯದೇವದ ಹೃದ್ರೋಗ ಆಸ್ಪತ್ರೆ ಘಟಕ ಮತ್ತು ಕಿದ್ವಾಯಿಯ ಕಾನ್ಸರ್ ಆಸ್ಪತ್ರೆಯ ಘಟಕ’ ವನ್ನು ಕರಾವಳಿ ಜಿಲ್ಲೆಯಲ್ಲಿ ಪ್ರಾರಂಭಿಸಬೇಕು ಎಂಬ ಹೋರಾಟ ಕೈಗೆತ್ತಿಕೊಂಡಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಶಾಸಕರು ಮತ್ತು ಉಡುಪಿಯ ನಾಲ್ವರು ಶಾಸಕರು ಈವರೆಗೂ ರಾಜ್ಯ ಸರ್ಕಾರಕ್ಕೆ ಆಸ್ಪತ್ರೆ ಬೇಡಿಕೆಯ ಪ್ರಸ್ತಾವನೆಯನ್ನೇ ಕಳುಹಿಸಿಲ್ಲ. ಇದು ಜಿಲ್ಲಾಡಳಿತ ಮತ್ತು ಶಾಸಕರು ಮೆಡಿಕಲ್ ಮಾಫಿಯಾ ಜೊತೆ ಕೈ ಜೋಡಿಸಿರುವುದಕ್ಕೆ ಸಾಕ್ಷಿಯಾಗಿದೆ. ಒಂದು ಕಡೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗಾಗಿ, ಜಯದೇವ ಹೃದ್ರೋಗ...

